Tag: ಯಾದಗಿರಿ ಸುದ್ದಿ

  • ಗುರುಗಳಿಗೆ ಕೃತಜ್ಞತೆ: 25 ವರ್ಷಗಳ ಬಳಿಕ ವಿದ್ಯಾರ್ಥಿಗಳ ಭಾವನಾತ್ಮಕ ಸ್ನೇಹ ಸಮ್ಮಿಲನ

    ಗುರುಗಳಿಗೆ ಕೃತಜ್ಞತೆ: 25 ವರ್ಷಗಳ ಬಳಿಕ ವಿದ್ಯಾರ್ಥಿಗಳ ಭಾವನಾತ್ಮಕ ಸ್ನೇಹ ಸಮ್ಮಿಲನ

    ಸುದ್ದಿ ಬೆಳಕು ವಾರ್ತೆ ಯಾದಗಿರಿ, ಏಪ್ರಿಲ್ 20:  ವಿದ್ಯಾರ್ಥಿಗಳು ಕಲಿತ ಶಾಲೆಯನ್ನು ಮತ್ತು ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸುವುದು ಸಂಸ್ಕಾರದ ಸಂಕೇತ. ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಇಂತಹ ಗುರು ವಂದನಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ನಿವೃತ್ತ ಶಿಕ್ಷಕ ಸುಂದರ್ ಅವರು ಅಭಿಪ್ರಾಯಪಟ್ಟರು. ​ನಗರದ ಚಿರಂಜೀವಿ ಮೆಥೋಡಿಸ್ಟ್ ಕನ್ನಡ ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ 2000–2001ನೇ ಸಾಲಿನ ಕನ್ನಡ ಮಾಧ್ಯಮ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ‘ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು…

  • ಯಾದಗಿರಿ ಬಿಜೆಪಿ ಕಚೇರಿಯಲ್ಲಿ ಬಸವಣ್ಣ ಜಯಂತಿ ಆಚರಣೆ

    ಯಾದಗಿರಿ ಬಿಜೆಪಿ ಕಚೇರಿಯಲ್ಲಿ ಬಸವಣ್ಣ ಜಯಂತಿ ಆಚರಣೆ

    ಸುದ್ದಿ ಬೆಳಕು ವಾರ್ತೆ ಯಾದಗಿರಿ, ಏಪ್ರಿಲ್ 20 : ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಗಜ್ಯೋತಿ ಶ್ರೀ ಬಸವಣ್ಣನವರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಮುಖಂಡರು ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ಗೌಡ ವಿಭೂತಿಹಳ್ಳಿ, ಸಮಾನತೆ, ಜಾತಿ ನಿರ್ಮೂಲನೆ, ಕಾಯಕ ತತ್ವ ಹಾಗೂ ಸಮಾಜ ಸುಧಾರಣೆಗೆ ಬಸವಣ್ಣನವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. 12ನೇ ಶತಮಾನದಲ್ಲಿಯೇ ಜಾತಿ ಭೇದ ನಿವಾರಣೆಗಾಗಿ ಬಸವಣ್ಣರು ಹೋರಾಡಿದ್ದು, ಇಂದಿಗೂ ಸಮಾಜದಲ್ಲಿ…

  • ನಗನೂರು ದುರಂತ ಪೀಡಿತರಿಗೆ ಪರಿಹಾರ ಘೋಷಣೆ ಮಾಡಿ: ಶಾಸಕ ಕಂದಕೂರ ಆಗ್ರಹ

    ನಗನೂರು ದುರಂತ ಪೀಡಿತರಿಗೆ ಪರಿಹಾರ ಘೋಷಣೆ ಮಾಡಿ: ಶಾಸಕ ಕಂದಕೂರ ಆಗ್ರಹ

    ಸುದ್ದಿ ಬೆಳಕು ವಾರ್ತೆ ಯಾದಗಿರಿ, ಏಪ್ರಿಲ್ 20 : ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಸಂಭವಿಸಿದ ದುರಂತ ಘಟನೆಗಳ ಪೀಡಿತ ಕುಟುಂಬಗಳಿಗೆ ತಕ್ಷಣ ಪರಿಹಾರಧನ ಘೋಷಿಸಬೇಕು ಎಂದು ಶಾಸಕ ಶರಣಗೌಡ ಕಂದಕೂರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮಾರ್ಚ್ 29, 2026ರಂದು ನಗನೂರು ಗ್ರಾಮದಲ್ಲಿ ರೈತನ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ನಾಲ್ವರು ದಲಿತ ಮಕ್ಕಳು ಬಿಸಿಲಿನ ತಾಪದ ನಡುವೆ ಮೃತಪಟ್ಟಿದ್ದರು. ಈ ದುರ್ಘಟನೆಗೆ ಸುಮಾರು 20 ದಿನಗಳು ಕಳೆದರೂ ಸರ್ಕಾರದಿಂದ ಯಾವುದೇ ಪರಿಹಾರ ಘೋಷಣೆ ಅಥವಾ…

  • ಜಯ ಕರ್ನಾಟಕ ಸಂಘಟನೆ ವತಿಯಿಂದ ಬಸವೇಶ್ವರ ಜಯಂತಿ ಆಚರಣೆ

    ಜಯ ಕರ್ನಾಟಕ ಸಂಘಟನೆ ವತಿಯಿಂದ ಬಸವೇಶ್ವರ ಜಯಂತಿ ಆಚರಣೆ

    ಸುದ್ದಿ ಬೆಳಕು ವಾರ್ತೆ  ಯಾದಗಿರಿ, ಏಪ್ರಿಲ್ 20 : ನಗರದ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಕಾರ್ಯಾಲಯದಲ್ಲಿ ಜಗದ್ಗುರು ಬಸವೇಶ್ವರರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಬಿ.ಎನ್. ವಿಶ್ವನಾಥ್ ನಾಯಕ್, ಬಸವಣ್ಣರು 12ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಮಹಾನ್ ವ್ಯಕ್ತಿ ಎಂದು ಹೇಳಿದರು. ಪ್ರತಿಯೊಬ್ಬ ಜೀವಿಯ ಆತ್ಮೋದ್ಧಾರಕ್ಕೆ ದಾರಿದೀಪವಾಗಿರುವ ಅವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು. ಅಂದಿನ ಕಾಲದಲ್ಲಿ ರಾಜ್ಯದ ಪ್ರಧಾನಿಯಾಗಿದ್ದರೂ ಬಸವಣ್ಣರು ಪ್ರಜಾಪ್ರಭುತ್ವ,…

  • ಬಸವಣ್ಣ ಜಯಂತಿ ಆಚರಣೆ – ಸಮಾನತೆಯ ಸಂದೇಶ ಸಾರಿದ ಭೀಮುನಾಯಕ

    ಬಸವಣ್ಣ ಜಯಂತಿ ಆಚರಣೆ – ಸಮಾನತೆಯ ಸಂದೇಶ ಸಾರಿದ ಭೀಮುನಾಯಕ

    ಸುದ್ದಿ ಬೆಳಕು ವಾರ್ತೆ  ಯಾದಗಿರಿ, ಏಪ್ರಿಲ್ 20: “ಕಾಯಕವೇ ಕೈಲಾಸ” ಎಂಬ ಮಹತ್ವದ ತತ್ವವನ್ನು ವಿಶ್ವಕ್ಕೆ ಸಾರಿದ 12ನೇ ಶತಮಾನದ ಮಹಾನ್ ಸಮಾಜ ಸುಧಾರಕ ಬಸವಣ್ಣರು ಸಮಾನತೆಯ ಹೋರಾಟದ ಪ್ರತೀಕ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಹೇಳಿದರು. ನಗರದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯಾಲಯದಲ್ಲಿ 893ನೇ ಬಸವಣ್ಣ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದ ನಂತರ ಅವರು ಮಾತನಾಡಿದರು. ಬಸವಣ್ಣರು ಸಮಗ್ರ ಕ್ರಾಂತಿಯ…

  • ದೇವರಭೂಪೂರದಲ್ಲಿ ಧಾರ್ಮಿಕ ಮಹೋತ್ಸವಕ್ಕೆ ಚಾಲನೆ – ಜಗದ್ಗುರುಗಳಿಂದ ಪೋಸ್ಟರ್ ಬಿಡುಗಡೆ

    ದೇವರಭೂಪೂರದಲ್ಲಿ ಧಾರ್ಮಿಕ ಮಹೋತ್ಸವಕ್ಕೆ ಚಾಲನೆ – ಜಗದ್ಗುರುಗಳಿಂದ ಪೋಸ್ಟರ್ ಬಿಡುಗಡೆ

    ಸುದ್ದಿ ಬೆಳಕು ವಾರ್ತೆ ದೇವರಭೂಪೂರ, ಏಪ್ರಿಲ್ 19  ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಅಮರೇಶ್ವರ ಗುರುಗಳ 21ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಶ್ರೀ ಷ.ಬ್ರ. ಅಭಿನವ ಗಜದಂಡ ಶಿವಾಚಾರ್ಯರ 21ನೇ ಗುರುಪಟ್ಟಾಧಿಕಾರ ಮಹೋತ್ಸವದ ಪೋಸ್ಟರ್ ಅನ್ನು ಭಕ್ತರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರುಗಳು, ಗುರು ಪರಂಪರೆಯ ಮಹತ್ವವನ್ನು ವಿವರಿಸಿ, ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವುದರ ಜೊತೆಗೆ ನೈತಿಕ ಮೌಲ್ಯಗಳನ್ನು ಬಲಪಡಿಸುತ್ತವೆ ಎಂದು ಹೇಳಿದರು.…

  • ಶಾಂತಪೂರ ಕ್ರಾಸ್ ಬಳಿ ರಸ್ತೆ ತಡೆ ಹೋರಾಟ – ಹೆದ್ದಾರಿ ಕಾಮಗಾರಿ ಆರಂಭಕ್ಕೆ ಆಗ್ರಹ

    ಶಾಂತಪೂರ ಕ್ರಾಸ್ ಬಳಿ ರಸ್ತೆ ತಡೆ ಹೋರಾಟ – ಹೆದ್ದಾರಿ ಕಾಮಗಾರಿ ಆರಂಭಕ್ಕೆ ಆಗ್ರಹ

    ಸುದ್ದಿ ಬೆಳಕು ವಾರ್ತೆ ಸುರಪುರ ಏಪ್ರಿಲ್ 18 : ತಾಲೂಕಿನ ಶಾಂತಪೂರ ಕ್ರಾಸ್ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿ-150 ಅಗಲೀಕರಣ ಹಾಗೂ ರಸ್ತೆ ಕಾಮಗಾರಿ ತಕ್ಷಣ ಆರಂಭಿಸುವಂತೆ ಆಗ್ರಹಿಸಿ ಇಂದು ಭಾನುವಾರ ಬೆಳಗ್ಗೆ 9 ಗಂಟೆಯಿಂದ ರಸ್ತೆ ತಡೆ (ರಾಸ್ತಾ ರೋಖೋ) ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಂಥಣಿ, ಬಂಡೋಳಿ, ಶಾಂತಪೂರ, ಹುಣಸಿಹೊಳೆ, ಲಿಂಗದಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ತಿಳಿಸಿದ್ದಾರೆ. ಈ ಕುರಿತು ಶನಿವಾರ ತಹಸೀಲ್ದಾರ್ ಹಾಗೂ ಪೊಲೀಸ್ ಇನ್ಸಪೆಕ್ಟರ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಮುಖಂಡರು,…

  • ಮಹಿಳಾ ಮೀಸಲಾತಿ ವಿಧೇಯಕ ವಿಫಲ – ಕಾಂಗ್ರೆಸ್ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಆಕ್ರೋಶ

    ಮಹಿಳಾ ಮೀಸಲಾತಿ ವಿಧೇಯಕ ವಿಫಲ – ಕಾಂಗ್ರೆಸ್ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಆಕ್ರೋಶ

    ಸುದ್ದಿ ಬೆಳಕು ವಾರ್ತೆ ಸೈದಾಪುರ ಏಪ್ರಿಲ್ 18 : ಲೋಕಸಭೆಯಲ್ಲಿ ಮಹಿಳೆಯರಿಗೆ ಶೇಕಡಾ ೩೩ರಷ್ಟು ಮೀಸಲಾತಿ ಕಲ್ಪಿಸುವ ಮಹತ್ವದ ವಿಧೇಯಕಕ್ಕೆ ಅಗತ್ಯ ಬಹುಮತ ದೊರೆಯದೆ ವಿಫಲವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ(ಇಂಡಿಯಾ) ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುನೀತಾ ಚೌವ್ಹಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದ ಮಹಿಳೆಯರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮುಂದಿಟ್ಟ ಐತಿಹಾಸಿಕ ಬಿಲ್‌ಗೆ ಕಾಂಗ್ರೆಸ್ ಮಿತ್ರಪಕ್ಷಗಳು ಬೆಂಬಲ ನೀಡದಿರುವುದು ಖಂಡನೀಯ ಎಂದು ಹೇಳಿದರು.…

  • ಹತ್ತಿಕುಣಿ ಕಾಲುವೆ ದುರಸ್ತಿ ಕಾರ್ಯ ಶ್ಲಾಘನೀಯ: ಮಾನೇಗಾರ್

    ಹತ್ತಿಕುಣಿ ಕಾಲುವೆ ದುರಸ್ತಿ ಕಾರ್ಯ ಶ್ಲಾಘನೀಯ: ಮಾನೇಗಾರ್

    ಸುದ್ದಿ ಬೆಳಕು ವಾರ್ತೆ ಸೈದಾಪುರ ಏಪ್ರಿಲ್ 18 : ಗುರುಮಠಕಲ್ ಕ್ಷೇತ್ರದ ಹತ್ತಿಕುಣಿ ಕ್ಲಸ್ಟರ್ ಯೋಜನೆಯಡಿ 72 ಕೋಟಿ ರೂ. ಮೊತ್ತದ ಕಾಮಗಾರಿಗೆ ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ, ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರ್ಯವನ್ನು ಕ್ಷೇತ್ರದ ರೈತಾಪಿ ವರ್ಗದ ಪರವಾಗಿ ಕೆ.ಪಿ.ಸಿ.ಸಿ ಸದಸ್ಯ ಶರಣಪ್ಪ ಮಾನೇಗಾರ್ ಶ್ಲಾಘಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಹತ್ತಿಕುಣಿ ಎಡದಂಡೆ ಕಾಲುವೆ 1973ರಲ್ಲಿ ನಿರ್ಮಾಣಗೊಂಡಿದ್ದು, ಸುಮಾರು 14 ಕಿಲೋ ಮೀಟರ್ ಉದ್ದ ಹೊಂದಿದೆ ಎಂದು…

  • ಹತ್ತಿಕುಣಿ ಕಾಲುವೆ ದುರಸ್ತಿ ಯೋಜನೆ | ₹72 ಕೋಟಿ ಅನುದಾನ : ಚಿಂಚನಸೂರ್ ಹರ್ಷ

    ಹತ್ತಿಕುಣಿ ಕಾಲುವೆ ದುರಸ್ತಿ ಯೋಜನೆ | ₹72 ಕೋಟಿ ಅನುದಾನ : ಚಿಂಚನಸೂರ್ ಹರ್ಷ

    ಸುದ್ದಿ ಬೆಳಕು ವಾರ್ತೆ ಯಾದಗಿರಿ, ಏಪ್ರಿಲ್ 18 :  ಯಾದಗಿರಿ ಜಿಲ್ಲೆಯ ಗುರುಮಠಕಲ್‌ ಮತಕ್ಷೇತ್ರದ ವ್ಯಾಪ್ತಿಯ ಹತ್ತಿಕುಣಿ ಕ್ಲಸ್ಟರ್ ಯೋಜನೆಗೆ ಸಂಬಂಧಿಸಿದ ₹72 ಕೋಟಿ ರೂಪಾಯಿ ಮೊತ್ತದ ಕಾಮಗಾರಿಯ ವಿನ್ಯಾಸ ವರದಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿರುವುದಕ್ಕೆ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯು ಗುರುಮಠಕಲ್ ಮತಕ್ಷೇತ್ರದ ಹತ್ತಿಕುಣಿ, ಯಡ್ಡಳ್ಳಿ, ಹೊನಗೇರಾ, ಬಂದಳ್ಳಿ ಮತ್ತು ಮಂಡರಗಿ ಸೇರಿದಂತೆ ಬರಪೀಡಿತ…

Suddi Belaku