Tag: Suddi Belaku

  • ಗ್ರಾಮ ಪಂಚಾಯತಿಯ ಗ್ರಂಥಾಲಯಗಳಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರಕ್ಕೆ ಆಹ್ವಾನ

    ಗ್ರಾಮ ಪಂಚಾಯತಿಯ ಗ್ರಂಥಾಲಯಗಳಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರಕ್ಕೆ ಆಹ್ವಾನ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಗ್ರಾಮೀಣ ಭಾಗದ ಎಲ್ಲಾ ಗ್ರಾಮ ಪಂಚಾಯತಿಯ ಗ್ರಂಥಾಲಯಗಳಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಮೇ 1 ರಿಂದ 15ರ ವರೆಗೆ ಆಯೋಜಿಸಲಾಗಿದೆ ಎಂದು ಎಂದು ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಲವೀಶ್ ಒರಡಿಯಾ ಅವರು ತಿಳಿಸಿದ್ದಾರೆ. ಶಿಬಿರವನ್ನು ವ್ಯವಸ್ಥಿತವಾಗಿ 2026ರ ಮೇ 1 ರಿಂದ ರಿಂದ 15ರ ವರೆಗೆ ಜರುಗುವಂತೆ ಕ್ರಮವಹಿಸಲು ಹಾಗೂ ಶಿಬಿರ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಮೇಲ್ವಿಚಾರಣೆ ಕೈಗೊಳ್ಳಲು ಈ ಕಛೇರಿಯಿಂದ ಈಗಾಗಲೇ ಎಲ್ಲಾ…

  • ಕನ್ನಡ ಪ್ರೀತಿಗೆ ಹೊಸ ರೂಪ: ಮದುವೆ ಕಾರ್ಡ್‌ನಲ್ಲಿ ಕರ್ನಾಟಕ ನಕ್ಷೆ

    ಕನ್ನಡ ಪ್ರೀತಿಗೆ ಹೊಸ ರೂಪ: ಮದುವೆ ಕಾರ್ಡ್‌ನಲ್ಲಿ ಕರ್ನಾಟಕ ನಕ್ಷೆ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಜಿಲ್ಲೆಯ ಯರಗೋಳ ಗ್ರಾಮದಲ್ಲಿ ಕನ್ನಡಾಭಿಮಾನವನ್ನು ವಿಶಿಷ್ಟವಾಗಿ ಅಭಿವ್ಯಕ್ತಿಸಿದ ಘಟನೆ ಎಲ್ಲರ ಗಮನ ಸೆಳೆದಿದೆ. ಮಾನೇಗಾರ ಕುಟುಂಬವು ತಮ್ಮ ಮನೆಯ ವಿವಾಹ ಆಮಂತ್ರಣ ಪತ್ರಿಕೆಯನ್ನು ಕರ್ನಾಟಕ ನಕ್ಷೆ ವಿನ್ಯಾಸದಲ್ಲಿ ಮುದ್ರಿಸಿ, ನಾಡು-ನುಡಿಯ ಮೇಲಿನ ತಮ್ಮ ಪ್ರೀತಿಯನ್ನು ಸೊಗಸಾಗಿ ಪ್ರದರ್ಶಿಸಿದೆ. ಗ್ರಾಮದ ಕಾಶಮ್ಮ–ಬಸವರಾಜ ಮಾನೇಗಾರ ದಂಪತಿಯ ತೃತೀಯ ಪುತ್ರ ರಮೇಶ್ ಅವರ ವಿವಾಹವು, ಅನ್ನಮ್ಮ–ವಜ್ರಕಾಂತ ಬೆಳಗುಂದಿ ದಂಪತಿಯ ಪುತ್ರಿ ಸುಧಾ ಅವರೊಂದಿಗೆ ನಿಶ್ಚಯಗೊಂಡಿದೆ. ಮೇ ೪ರಂದು ಯರಗೋಳ ಗ್ರಾಮದಲ್ಲೇ ಈ ವಿವಾಹ ಸಮಾರಂಭ…

  • ಗ್ರಾಮಸ್ಥರ ಹೋರಾಟಕ್ಕೆ ಜಯ – ಸ್ಮಶಾನ ಭೂಮಿ ಒತ್ತುವರಿ ತೆರವು

    ಗ್ರಾಮಸ್ಥರ ಹೋರಾಟಕ್ಕೆ ಜಯ – ಸ್ಮಶಾನ ಭೂಮಿ ಒತ್ತುವರಿ ತೆರವು

    ಸುದ್ದಿ ಬೆಳಕು ವಾರ್ತೆ ಹೊಳಲ್ಕೆರೆ : ತಾಲೂಕಿನ ಅಪ್ಪರಸನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಮೀಸಲಿರುವ 20 ಗುಂಟೆ ಸರ್ಕಾರಿ ಸ್ಮಶಾನ ಭೂಮಿ ಒತ್ತುವರಿಯನ್ನು ಆಡನೂರು ಗ್ರಾಪಂ ಪಿಡಿಓ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಶುಕ್ರವಾರ ತೆರುವುಗೊಳಿಸಲಾಯಿತು. ಈ ಮೂಲಕ ಕಳೆದ ಎರಡು ತಿಂಗಳಿನಿಂದ ಗ್ರಾಮಸ್ಥರು ನಡೆಸಿದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಅಪ್ಪರಸನಹಳ್ಳಿ ಗ್ರಾಮದ ರಿ.ಸ.ನಂ.78ರಲ್ಲಿ ಒಟ್ಟು 11 ಎಕರೆ 37 ಗುಂಟೆ ಸರ್ಕಾರಿ ಹುಲ್ಲುಬನ್ನಿ ಖರಾಬು ಜಮೀನು ಇದೆ. ಇದರಲ್ಲಿ 20 ಗುಂಟೆ ಜಾಗವನ್ನು ಹೊಳಲ್ಕೆರೆ ತಹಶೀಲ್ದಾರ್ ಅವರು ಗ್ರಾಮಸ್ಥರಿಗೆ…

  • ಯುವ ಶಕ್ತಿ ದೇಶದ ಪ್ರಗತಿಗೆ ಆಧಾರ : ಶರಣಪ್ಪ ಮಾನೇಗಾರ್

    ಯುವ ಶಕ್ತಿ ದೇಶದ ಪ್ರಗತಿಗೆ ಆಧಾರ : ಶರಣಪ್ಪ ಮಾನೇಗಾರ್

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ನಮ್ಮ ರಾಜ್ಯ, ರಾಷ್ಟ್ರದ ಪ್ರಗತಿಗೆ ಯುವ ಶಕ್ತಿಯ ಕೊಡುಗೆ ಅತ್ಯವಶ್ಯವಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡರಾದ ಶರಣಪ್ಪ ಮಾನೇಗಾರ ಅವರು ತಿಳಿಸಿದರು. ಯಾದಗಿರಿ ತಾಲೂಕಿನ ಕಿಲ್ಲನಕೇರಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಿಲ್ಲನಕೇರಾ ಪ್ರಿಮಿಯರ್ ಲೀಗ್ ಸೀಸನ್ ನಾಲ್ಕರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಯುವಕರು ಈ ರಾಷ್ಟ್ರದ ಸಂಪತ್ತು ಅವರನ್ನು ಬೆನ್ನು ತಟ್ಟಿ ಬೆಂಬಲಿಸಿ ಪ್ರೋತ್ಸಾಹಿಸುವುದು ನಮ್ಮ ಆದ್ಯ ಕರ್ತವ್ಯ ಈ ನಿಟ್ಟಿನಲ್ಲಿ…

  • ಮಾಜಿ ಸೈನಿಕರಿಗೇ ಅನ್ಯಾಯ: ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದ ಗ್ರಾಮ ಪಂಚಾಯತಿ ಅಧಿಕಾರಿಗಳು

    ಮಾಜಿ ಸೈನಿಕರಿಗೇ ಅನ್ಯಾಯ: ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದ ಗ್ರಾಮ ಪಂಚಾಯತಿ ಅಧಿಕಾರಿಗಳು

    ಆಸ್ತಿ ತೆರಿಗೆ ರಿಯಾಯಿತಿ ಕೇವಲ ಕಾಗದದಲ್ಲೇ – ದಿನವೂ ಕಚೇರಿ ಸುತ್ತ ಅಲೆದಾಡುವ ಮಾಜಿ ಯೋಧ ಸುದ್ದಿ ಬೆಳಕು ವಾರ್ತೆ ಸೈದಾಪುರ : ದೇಶದ ಗಡಿ ಕಾಯ್ದು ಜೀವ ಪಣಕ್ಕಿಟ್ಟ ಮಾಜಿ ಸೈನಿಕನಿಗೆ, ತನ್ನ ಊರಿನಲ್ಲೇ ಗೌರವ ಸಿಗದ ದುಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರವು ಸ್ಪಷ್ಟ ಆದೇಶದ ಮೂಲಕ ಮಾಜಿ ಸೈನಿಕರಿಗೆ ಆಸ್ತಿ ತೆರಿಗೆಯಲ್ಲಿ 50% ರಿಯಾಯಿತಿ ನೀಡಬೇಕೆಂದು ಘೋಷಿಸಿದರೂ, ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆ ಸೌಲಭ್ಯ ನೆಲಮಟ್ಟದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸೈದಾಪುರ ಪಟ್ಟಣದ ರಮೇಶ…

  • ಪೆಟ್ರೋಲ್ ಪಂಪ್ ಹಂಚಿಕೆಯಲ್ಲಿ ಅಕ್ರಮ ಆರೋಪ

    ಪೆಟ್ರೋಲ್ ಪಂಪ್ ಹಂಚಿಕೆಯಲ್ಲಿ ಅಕ್ರಮ ಆರೋಪ

    ಸುದ್ದಿ ಬೆಳಕು ವಾರ್ತೆ ಸೈದಾಪುರ : ಬೀದರ-ಗುತ್ತಿ ರಾಷ್ಟ್ರೀಯ ಹೆದ್ದಾರಿ 150 ಮಾರ್ಗದ ಕಡೇಚೂರು ದಿಂದ ಸೈದಾಪುರ (108-116ಕಿ.ಮೀ) ಮಧ್ಯದಲ್ಲಿ ಕೇಂದ್ರ ಸರ್ಕಾರದ ಸೌಮ್ಯದ ಎಚ್.ಪಿ.ಸಿ.ಎಲ್.ಸಂಸ್ಥೆಯ ಎಚ್.ಪಿ.ಪೆಟ್ರೋಲ್ ಪಂಪ್ ಡೀಲರ್‍ ಶಿಪ್ ಹಂಚಿಕೆಯಲ್ಲಿ ಗಂಭೀರ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿದೆ. ಸ್ಥಳೀಯ ಮೂಲಗಳ ಪ್ರಕಾರ, ಈ ಪೆಟ್ರೋಲ್ ಪಂಪ್ ಡೀಲರ್‍ ಶಿಪ್ ಅನ್ನು ಪಡೆದುಕೊಳ್ಳಲು 2023ರಲ್ಲಿ ಹಿಂದೂಳಿದ ವರ್ಗ ಮೀಸಲಾತಿ ಅಡಿಯಲ್ಲಿ ಅರ್ಜಿ ಅಹ್ವಾನಿಸಲಾಗಿತ್ತು. ಅದರಂತೆ ಅನೇಕರು…

  • ಕುಡಿಯುವ ನೀರಿಗೆ ಹಾಹಾಕಾರ – ಬೀದಿಗಿಳಿದು ಹೋರಾಟಕ್ಕೆ ಮುದ್ನಾಳ ಎಚ್ಚರಿಕೆ

    ಕುಡಿಯುವ ನೀರಿಗೆ ಹಾಹಾಕಾರ – ಬೀದಿಗಿಳಿದು ಹೋರಾಟಕ್ಕೆ ಮುದ್ನಾಳ ಎಚ್ಚರಿಕೆ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ನಗರ ಸೇರಿದಂತೆಯೇ ಯಾದಗಿರಿ ವಿಧಾನಸಭಾ ಮತಕ್ಷೇತ್ರದಲ್ಲಿ ಪ್ರತಿ ಹಳ್ಳಿಗಳಲ್ಲೂ ಕುಡಿಯುವ ನೀರಿನ ಭೀಕರ ಸಮಸ್ಯೆ ಎದುರಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿರುವ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಮಹೇಶರೆಡ್ಡಿ ಮುದ್ನಾಳ ಅವರು, ತಕ್ಷಣವೇ ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದಿದ್ದರೇ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ ಈ ಕುರಿತು ಹೇಳಿಕೆ ನೀಡಿರುವ ಅವರು, ಬೇಸಿಗೆ ಆರಂಭವಾಗಿ ಮೂರು ತಿಂಗಳೂ ಗತಿಸಿದರೂ ಜನರಿಗೆ ಮತ್ತು ಜಾನುವಾರುಗಳಿಗೆ ಶುದ್ದ ಕುಡಿಯುವ…

  • ಮೇ 1ರಂದು ಭಗವಾನ ಗೌತಮ ಬುದ್ಧರ ಜಯಂತಿ

    ಮೇ 1ರಂದು ಭಗವಾನ ಗೌತಮ ಬುದ್ಧರ ಜಯಂತಿ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಜಿಲ್ಲಾಡಳಿತ, ಜಿಪಂ ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಗವಾನ ಗೌತಮ ಬುದ್ದ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಮೇ 1 ರಂದು ಬೆಳಗ್ಗೆ 11ಕ್ಕೆ ಇಲ್ಲಿನ ಲುಂಬಿನಿ ಉದ್ಯಾನವನದಲ್ಲಿ ಭಗವಾನ ಗೌತಮ ಬುದ್ಧರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪ್ರಮುಖರಾದ ಮರೆಪ್ಪ ಚಟ್ಟರಕರ್ ಮತ್ತು ಬಾಬುರಾವ ಭೂತಾಳೆ ತಿಳಿಸಿದ್ದಾರೆ. ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರನ ನಾಗಲೋಕ ಬುದ್ಧವಿಹಾರದ ಪೂಜ್ಯ ಭಂತೆ ಶಾಂತಿ…

  • ಸುಳ್ಳು ದೂರುಗಳಿಗೆ ಕಡಿವಾಣ – 24 ಮಂದಿಗೆ ₹1.57 ಲಕ್ಷ ವಸೂಲಾತಿ ನೋಟಿಸ್

    ಸುಳ್ಳು ದೂರುಗಳಿಗೆ ಕಡಿವಾಣ – 24 ಮಂದಿಗೆ ₹1.57 ಲಕ್ಷ ವಸೂಲಾತಿ ನೋಟಿಸ್

    ಸುದ್ದಿ ಬೆಳಕು ವಾರ್ತೆ ಯಾದಗಿರಿ: ಸುಳ್ಳು ಹಾಗೂ ದುರುದ್ದೇಶಪೂರಿತ ದೂರುಗಳನ್ನು ನೀಡಿ ಬಳಿಕ ಹಿಂಪಡೆಯುವ ಪ್ರವೃತ್ತಿಗೆ ಕಡಿವಾಣ ಹಾಕಲು ಜಿಲ್ಲಾ ಪಂಚಾಯತ್ ಕಠಿಣ ಕ್ರಮ ಕೈಗೊಂಡಿದ್ದು, 24 ದೂರುದಾರರಿಗೆ ಒಟ್ಟು ₹1,57,475 ವಸೂಲಾತಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ತಿಳಿಸಿದ್ದಾರೆ. ಸರ್ಕಾರದ 05.03.2021ರ ಸುತ್ತೋಲೆಯ ಅನ್ವಯ, ಮೊದಲು ದೂರು ಸಲ್ಲಿಸಿ ನಂತರ ಹಿಂಪಡೆದ ಹಾಗೂ ಸಾಕ್ಷ್ಯಾಧಾರವಿಲ್ಲದೆ ಸುಳ್ಳು ದೂರು ನೀಡಿದವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ನೋಟಿಸ್ ಪಡೆದವರು ಸಮಾಧಾನಕರ…

  • ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ – ನ್ಯಾಯಾಧೀಶ ಮರಿಯಪ್ಪ

    ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ – ನ್ಯಾಯಾಧೀಶ ಮರಿಯಪ್ಪ

    ಸುದ್ದಿ ಬೆಳಕು ವಾರ್ತೆ ​ಯಾದಗಿರಿ: ಜನಸಾಮಾನ್ಯರು ದೈನಂದಿನ ಜೀವನದಲ್ಲಿ ಕಾನೂನಿನ ಮೂಲಭೂತ ಅರಿವು ಹೊಂದಿರುವುದು ಅತ್ಯಗತ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಮರಿಯಪ್ಪ ಅವರು ತಿಳಿಸಿದರು. ​ಯಾದಗಿರಿ ಜಿಲ್ಲೆಯ ಹೊನಗೇರಾ ಗ್ರಾಮ ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಯಾದಗಿರಿ ವತಿಯಿಂದ ಮತ್ತು ಶಿಕ್ಷಣ ಇಲಾಖೆ ,ಗ್ರಾಮ ಪಂಚಾಯಿತಿ, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾರ್ಮಿಕ ಇಲಾಖೆ,ಇವರುಗಳ…

Suddi Belaku