Tag: Saidapur News

  • ಅರ್ಹ ಮತದಾರರು ಪಟ್ಟಿಯಲ್ಲಿ ಹೆಸರು ಖಚಿತಪಡಿಸಿಕೊಳ್ಳಿ: ಮೀನಾಕ್ಷಿ ವಿ. ನಾಯಕ

    ಅರ್ಹ ಮತದಾರರು ಪಟ್ಟಿಯಲ್ಲಿ ಹೆಸರು ಖಚಿತಪಡಿಸಿಕೊಳ್ಳಿ: ಮೀನಾಕ್ಷಿ ವಿ. ನಾಯಕ

    ಸುದ್ದಿ ಬೆಳಕು ವಾರ್ತೆ ಸೈದಾಪೂರ: ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಂಡು, ಅಗತ್ಯವಿದ್ದಲ್ಲಿ ಹೊಸ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬೇಕು ಎಂದು ಸೈದಾಪೂರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮೀನಾಕ್ಷಿ ವಿ. ನಾಯಕ ಕರೆ ನೀಡಿದರು. ಕಾಂಗ್ರೆಸ್ ಪಕ್ಷದ ವತಿಯಿಂದ ಗೊಂದಡಗಿ, ಭೀಮನಳ್ಳಿ, ಬೆಳಗುಂದಿ, ಆನೂರ ಬಿ, ಆನೂರ ಕೆ, ಮಲ್ಹಾರ್, ಸಾವೂರ, ಹೆಗ್ಗಣಗೇರಾ ಹಾಗೂ ಸೈದಾಪೂರ ಇಂದಿರಾನಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಎಸ್‌ಐಆರ್ ಹಾಗೂ ಬಿಎಲ್‌ಎ-2 ಜಾಗೃತಿ…

  • ಮಾಜಿ ಸೈನಿಕರಿಗೇ ಅನ್ಯಾಯ: ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದ ಗ್ರಾಮ ಪಂಚಾಯತಿ ಅಧಿಕಾರಿಗಳು

    ಮಾಜಿ ಸೈನಿಕರಿಗೇ ಅನ್ಯಾಯ: ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದ ಗ್ರಾಮ ಪಂಚಾಯತಿ ಅಧಿಕಾರಿಗಳು

    ಆಸ್ತಿ ತೆರಿಗೆ ರಿಯಾಯಿತಿ ಕೇವಲ ಕಾಗದದಲ್ಲೇ – ದಿನವೂ ಕಚೇರಿ ಸುತ್ತ ಅಲೆದಾಡುವ ಮಾಜಿ ಯೋಧ ಸುದ್ದಿ ಬೆಳಕು ವಾರ್ತೆ ಸೈದಾಪುರ : ದೇಶದ ಗಡಿ ಕಾಯ್ದು ಜೀವ ಪಣಕ್ಕಿಟ್ಟ ಮಾಜಿ ಸೈನಿಕನಿಗೆ, ತನ್ನ ಊರಿನಲ್ಲೇ ಗೌರವ ಸಿಗದ ದುಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರವು ಸ್ಪಷ್ಟ ಆದೇಶದ ಮೂಲಕ ಮಾಜಿ ಸೈನಿಕರಿಗೆ ಆಸ್ತಿ ತೆರಿಗೆಯಲ್ಲಿ 50% ರಿಯಾಯಿತಿ ನೀಡಬೇಕೆಂದು ಘೋಷಿಸಿದರೂ, ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆ ಸೌಲಭ್ಯ ನೆಲಮಟ್ಟದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸೈದಾಪುರ ಪಟ್ಟಣದ ರಮೇಶ…

  • ಪೆಟ್ರೋಲ್ ಪಂಪ್ ಹಂಚಿಕೆಯಲ್ಲಿ ಅಕ್ರಮ ಆರೋಪ

    ಪೆಟ್ರೋಲ್ ಪಂಪ್ ಹಂಚಿಕೆಯಲ್ಲಿ ಅಕ್ರಮ ಆರೋಪ

    ಸುದ್ದಿ ಬೆಳಕು ವಾರ್ತೆ ಸೈದಾಪುರ : ಬೀದರ-ಗುತ್ತಿ ರಾಷ್ಟ್ರೀಯ ಹೆದ್ದಾರಿ 150 ಮಾರ್ಗದ ಕಡೇಚೂರು ದಿಂದ ಸೈದಾಪುರ (108-116ಕಿ.ಮೀ) ಮಧ್ಯದಲ್ಲಿ ಕೇಂದ್ರ ಸರ್ಕಾರದ ಸೌಮ್ಯದ ಎಚ್.ಪಿ.ಸಿ.ಎಲ್.ಸಂಸ್ಥೆಯ ಎಚ್.ಪಿ.ಪೆಟ್ರೋಲ್ ಪಂಪ್ ಡೀಲರ್‍ ಶಿಪ್ ಹಂಚಿಕೆಯಲ್ಲಿ ಗಂಭೀರ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿದೆ. ಸ್ಥಳೀಯ ಮೂಲಗಳ ಪ್ರಕಾರ, ಈ ಪೆಟ್ರೋಲ್ ಪಂಪ್ ಡೀಲರ್‍ ಶಿಪ್ ಅನ್ನು ಪಡೆದುಕೊಳ್ಳಲು 2023ರಲ್ಲಿ ಹಿಂದೂಳಿದ ವರ್ಗ ಮೀಸಲಾತಿ ಅಡಿಯಲ್ಲಿ ಅರ್ಜಿ ಅಹ್ವಾನಿಸಲಾಗಿತ್ತು. ಅದರಂತೆ ಅನೇಕರು…

  • ಆರ್ಯ ವೈಶ್ಯ ಸಮಾಜದ ಪ್ರತಿಭಾವಂತ ಬಾದಾಮಿ ಪರಿವಾರದ ವಿದ್ಯಾರ್ಥಿಗಳಿಗೆ ಸನ್ಮಾನ

    ಆರ್ಯ ವೈಶ್ಯ ಸಮಾಜದ ಪ್ರತಿಭಾವಂತ ಬಾದಾಮಿ ಪರಿವಾರದ ವಿದ್ಯಾರ್ಥಿಗಳಿಗೆ ಸನ್ಮಾನ

    ಸಮಾಜ ಸೇವೆ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಅಗತ್ಯ ಸುದ್ದಿ ಬೆಳಕು ವಾರ್ತೆ ಸೈದಾಪುರ, ಏಪ್ರಿಲ್ 26: ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಮೂಲಾಧಾರವಾಗಿದ್ದು, ವಿದ್ಯಾರ್ಥಿಗಳು ತಮ್ಮ ಪರಿಶ್ರಮ ಮತ್ತು ದೃಢಸಂಕಲ್ಪದ ಮೂಲಕ ಉತ್ತಮ ಸಾಧನೆ ಮಾಡುವುದರ ಜೊತೆಗೆ ಸಮಾಜ ಸೇವೆ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ನ್ಯಾಯವಾದಿ ಸಂತೋಷ ಬಾದಾಮಿ ಹೇಳಿದರು. ಪಟ್ಟಣದಲ್ಲಿ ಆರ್ಯ ವೈಶ್ಯ ಸಮಾಜದ ಹಬ್ಬವಾದ ವಾಸವಿ ಜಯಂತಿ ಪ್ರಯುಕ್ತ ಬಾದಾಮಿ ಪರಿವಾರದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದರು. ಈ…

  • ಸೈದಾಪುರದಲ್ಲಿ ಅದ್ಧೂರಿಯಾಗಿ ಕನ್ನಿಕಾ ಪರಮೇಶ್ವರಿ ವಾಸವಿ ಜಯಂತಿ ಆಚರಣೆ

    ಸೈದಾಪುರದಲ್ಲಿ ಅದ್ಧೂರಿಯಾಗಿ ಕನ್ನಿಕಾ ಪರಮೇಶ್ವರಿ ವಾಸವಿ ಜಯಂತಿ ಆಚರಣೆ

    ವಾಸವಿ ಮಾತೆಯ ಜೀವನಾದರ್ಶಗಳು ಮಾನವ ಕುಲಕ್ಕೆ ಸ್ಪೂರ್ತಿ : ಗುಜ್ಜಾ ಸುದ್ದಿ ಬೆಳಕು ವಾರ್ತೆ ಸೈದಾಪುರ ಏಪ್ರಿಲ್ 26 : ವಾಸವಿ ಮಾತೆಯ ಆತ್ಮಸ್ಥೈರ್ಯ ಅನನ್ಯವಾದುದು, ಮಾನವನ ಮೋಕ್ಷ ಸಾಧನೆಗೆ ಆತ್ಮೋದ್ಧರಕ್ಕೆ ತ್ಯಾಗ ಬಲಿದಾನಗಳೇ ಮಾರ್ಗವೆಂದು ತೋರಿಸಿಕೊಟ್ಟ ಜಗನ್ಮಾತೆ ವಾಸವಿ ದೇವಿಯ ಜೀವನಾದರ್ಶಗಳು ಮಾನವ ಸಮುದಾಯಕ್ಕೆ ಸ್ಪೂರ್ತಿ ಎಂದು ಆರ್ಯ ವೈಶ್ಯ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಗುಜ್ಜಾ ಅಭಿಪ್ರಾಯಪಟ್ಟರು. ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಆರ್ಯ ವೈಶ್ಯ ಸಮಾಜದಿಂದ ಕನ್ನಿಕಾ ಪರಮೇಶ್ವರಿ ವಾಸವಿ ಜಯಂತಿ ಪ್ರಯುಕ್ತ…

  • ಎಸ್ಸೆಸ್ಸೆಲ್ಸಿಯಲ್ಲಿ ಶೇ.96 ಅಂಕ ಪಡೆದ ರಿಷಿಕಾ | ಹಿಂದಿಯಲ್ಲಿ ಶೇ. 100ರಷ್ಟು ಸಾಧನೆ

    ಎಸ್ಸೆಸ್ಸೆಲ್ಸಿಯಲ್ಲಿ ಶೇ.96 ಅಂಕ ಪಡೆದ ರಿಷಿಕಾ | ಹಿಂದಿಯಲ್ಲಿ ಶೇ. 100ರಷ್ಟು ಸಾಧನೆ

    ಪತ್ರಿಕಾ ವಿತರಕನ ಮಗಳಿಗೆ ವೈದ್ಯಕೀಯ ಕನಸು…! ಸುದ್ದಿ ಬೆಳಕು ವಾರ್ತೆ ಸೈದಾಪುರ. ಏಪ್ರಿಲ್ 24 : ಗ್ರಾಮೀಣ ಮಕ್ಕಳು ಎಂದರೆ ಮೂಗು ಮುರಿಯುವ ಜನತೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಸಾಧನೆ ಮಾಡಿದ ಕೀರ್ತಿ ಈ ಪ್ರತಿಭೆಗೆ ಸಲ್ಲಿಸುತ್ತದೆ. ಸೈದಾಪುರ ಪಟ್ಟಣದ ಪತ್ರಿಕಾ ವಿತರಕ ಕೆ. ಬಿ ರಾಘವೇಂದ್ರ ಮತ್ತು ಕೆ. ಬಿ ರೂಪ ದಂಪತಿಗಳ ಹಿರಿಯ ಮಗಳಾದ ಕುಮಾರಿ ರಿಷಿಕಾ ಕೆ.ಬಿ ಈಚೆಗೆ ನಡೆದ ಎಸ್ಸೆಸ್ಸೆಲ್ಸಿಯಲ್ಲಿ ಪರೀಕ್ಷೆಯಲ್ಲಿ ಶೇ.96.32 ಅಂಕ ಪಡೆದು ಸೈ ಎನಿಸಿಕೊಂಡಿದ್ದಾಳೆ. ಪ್ರಾಥಮಿಕ ಮತ್ತು…

  • ಸೈದಾಪುರ ವಲಯ ವೀರಶೈವ ಸಮಾಜದಿಂದ ಬಸವೇಶ್ವರ ಜಯಂತಿ ಆಚರಣೆ

    ಸೈದಾಪುರ ವಲಯ ವೀರಶೈವ ಸಮಾಜದಿಂದ ಬಸವೇಶ್ವರ ಜಯಂತಿ ಆಚರಣೆ

    ಮಹಾತ್ಮರನ್ನು ಪ್ರತಿನಿತ್ಯ ಸ್ಮರಣೆ ಮಾಡಬೇಕು: ಸೋಮೇಶ್ವರಾನಂದ ಸುದ್ದಿ ಬೆಳಕು ವಾರ್ತೆ ಸೈದಾಪುರ ಏಪ್ರಿಲ್ 20 : ಅನುಭವ ಮಂಟಪ ರಚಿಸಿ ನಾಡಿಗೆ ಹೊಸ ಕಲ್ಪನೆಯನ್ನು ಕೊಟ್ಟ ಮಹಾತ್ಮರನ್ನು ಪ್ರತಿನಿತ್ಯ ಸ್ಮರಣೆ ಮಾಡಬೇಕು. ಬಸವಣ್ಣವನರ ವಿಚಾರಧಾರೆಗಳು ಜಯಂತಿ ಆಚರಣೆಗೆ ಸೀಮಿತವಾಗದೆ ಲಿಂಗದಾರಿಗಳಾಗಿ ದಿನಾ ನಿತ್ಯದಲ್ಲಿ ಪಾಲನೆ ಮಾಡಬೇಕು ಎಂದು ಸಿದ್ಧಚೇತನಾಶ್ರಮದ ಸಿದ್ಧಾರೂಢ ಮಠದ ಸೋಮೇಶ್ವರಾನಂದ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು. ಪಟ್ಟಣದಲ್ಲಿ ವಲಯ ವೀರಶೈವ ಸಮಾಜದ ವತಿಯಿಂದ ವಿಶ್ವನಾಥ ಮಂದಿರದಲ್ಲಿ ಹಮ್ಮಿಕೊಂಡ ಬಸವೇಶ್ವರ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಬಸವಣ್ಣನವರು…

  • ವಿಷಪೂರಿತ ಅನಿಲದಿಂದ ಸಂಕಷ್ಟ: ಕೈಗಾರಿಕೆ ವಿರುದ್ಧ ಜನರ ಆಕ್ರೋಶ

    ವಿಷಪೂರಿತ ಅನಿಲದಿಂದ ಸಂಕಷ್ಟ: ಕೈಗಾರಿಕೆ ವಿರುದ್ಧ ಜನರ ಆಕ್ರೋಶ

    ಸುದ್ದಿ ಬೆಳಕು ವಾರ್ತೆ ಸೈದಾಪುರ, ಏಪ್ರಿಲ್ 17 : ಕಡೇಚೂರು–ಬಾಡಿಯಾಳ ಕೈಗಾರಿಕಾ ವಲಯದಲ್ಲಿನ ರಾಸಾಯನಿಕ ಕಂಪನಿಗಳಿಂದ ಹೊರಬರುತ್ತಿರುವ ವಿಷಪೂರಿತ ಅನಿಲ ಮತ್ತು ತ್ಯಾಜ್ಯಗಳಿಂದ ಸೈದಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ದಿನೇ ದಿನೇ ಹೆಚ್ಚುತ್ತಿರುವ ದುರ್ವಾಸನೆ ಹಾಗೂ ವಾಯು ಮಾಲಿನ್ಯದಿಂದ ಜನರಲ್ಲಿ ಆತಂಕ ಹೆಚ್ಚುತ್ತಿದ್ದು, ಈ ಹಿನ್ನೆಲೆ ಸ್ಥಳೀಯರು ಮತ್ತು ಸಾಮಾಜಿಕ ಹೋರಾಟಗಾರರು ಸಂಘಟಿತವಾಗಿ ಜನಜಾಗೃತಿ ಅಭಿಯಾನ ಆರಂಭಿಸಲು ಮುಂದಾಗಿದ್ದಾರೆ. ಪಟ್ಟಣದ ಜಿ.ಆರ್. ಪಾರ್ಕ್‌ನಲ್ಲಿ ಗುರುವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ‘ಕೈಗಾರಿಕಾ ಹಟವೋ…

  • ಸೈದಾಪುರದಲ್ಲಿ ಖ್ವಾಜಾ ಬಂದೇನವಾಜ್ ಉರುಸ್ – ಹಿಂದೂ-ಮುಸ್ಲಿಂ ಸೌಹಾರ್ದದ ಸಂಕೇತ

    ಸೈದಾಪುರದಲ್ಲಿ ಖ್ವಾಜಾ ಬಂದೇನವಾಜ್ ಉರುಸ್ – ಹಿಂದೂ-ಮುಸ್ಲಿಂ ಸೌಹಾರ್ದದ ಸಂಕೇತ

    ಸೈದಾಪುರ: ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಸೂಫಿ ಸಂತ ಖ್ವಾಜಾ ಬಂದೇನವಾಜ್ ಉರುಸ್ ಬುಧವಾರದಿಂದ ಆರಂಭವಾಗಿ ಭಕ್ತಿಭಾವದಿಂದ ಜರುಗುತ್ತಿದೆ. ಸಾವಿರಾರು ಭಕ್ತರು ಜಾತಿ-ಮತ ಭೇದವಿಲ್ಲದೆ ಉರುಸ್‌ನಲ್ಲಿ ಭಾಗವಹಿಸಿ ಧಾರ್ಮಿಕ ಏಕತೆಯ ಸಂದೇಶವನ್ನು ಸಾರುತ್ತಿದ್ದಾರೆ. ಗುರುವಾರ ಅಪಾರ ಭಕ್ತರ ಸಮ್ಮುಖದಲ್ಲಿ ಉರುಸ್ ಅದ್ಧೂರಿಯಾಗಿ ನಡೆಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ಬಂದ ಭಕ್ತರು ಜ್ಯೋತಿಯನ್ನು ಹೊತ್ತು ದರ್ಗಾಕ್ಕೆ ತೆರಳಿ ಹೂಮಾಲೆ, ಗಲೀಫ್ ಹಾಗೂ ಜ್ಯೋತಿಯನ್ನು ಸಮರ್ಪಿಸಿ ದರ್ಶನ ಪಡೆದರು. ಪಟ್ಟಣದಲ್ಲಿ ಹಿಂದೂ ಮತ್ತು ಮುಸ್ಲಿಂ ಆಚರಣೆಗಳು ವಿಭಿನ್ನವಾಗಿದ್ದರೂ, ಈ ಉರುಸ್‌ನಲ್ಲಿ ಇಬ್ಬರ ಭಾವೈಕ್ಯತೆ…

Suddi Belaku