ಜೈಲಿನಿಂದ ಹೊರಬಂದ ಮೇಲೆ ಒಳ್ಳೆಯ ನಾಗರಿಕರಾಗಿ ಬಾಳಿರಿ: ನ್ಯಾಯಾಧೀಶ ಮರಿಯಪ್ಪ ಸಲಹೆ

Posted by


ಯಾದಗಿರಿ : ಜೈಲಿಗೆ ಬಂದ ಕೈದಿಗಳು ತಮ್ಮ ಹಳೆಯ ತಪ್ಪುಗಳನ್ನು ತಿದ್ದಿಕೊಂಡು ಇಲ್ಲಿಂದ ಬಿಡುಗಡೆಯಾದ ಮೇಲೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಪರಿವರ್ತನೆ ಹೊಂದಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಮರಿಯಪ್ಪ ಅವರು ಕಿವಿಮಾತು ಹೇಳಿದರು.
ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಮಾದಕ ವಸ್ತು ಮುಕ್ತ ಭಾರತಕ್ಕಾಗಿ ಮಾದಕ ವಸ್ತು ಜಾಗೃತಿ ಮತ್ತು ಸ್ವಾಸ್ಥ್ಯ ಸಂಚರಣೆ ಯೋಜನೆ-2025’ (NALSA – Jagriti Scheme) ಅಡಿಯಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷೆಯು ಕೇವಲ ದಂಡನೆಯಲ್ಲ, ಅದು ವ್ಯಕ್ತಿಯನ್ನು ತಿದ್ದುವ ಒಂದು ಅವಕಾಶ. ಕೈದಿಗಳು ಮಾನಸಿಕವಾಗಿ ಬದಲಾಗಿ, ಸಮಾಜದ ಮುಖ್ಯವಾಹಿನಿಗೆ ಸೇರಲು ಸಿದ್ಧರಾಗಬೇಕು ಎಂದರು.
ದೇಶವನ್ನು ಮಾದಕ ವಸ್ತುಗಳ ಹಾವಳಿಯಿಂದ ಮುಕ್ತಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ವ್ಯಸನಮುಕ್ತ ಜೀವನವೇ ಸುಖೀ ಜೀವನಕ್ಕೆ ದಾರಿ ಎಂದು ಹೇಳಿದರು.
ಕೊರತೆಯಿಂದ ಯಾರು ಕೂಡ ನ್ಯಾಯದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಪ್ರಾಧಿಕಾರವು ಸದಾ ನೆರವಿಗೆ ಇರುತ್ತದೆ ಎಂದು ತಿಳಿಸಿದರು.
ಮಾಡುವುದು ಸಹಜ ಆದರೆ ಮಾಡಿದ ತಪ್ಪನ್ನೇ ಮೆಲುಕು ಹಾಕುತ್ತಾ ಕೂರದೆ, ಅದನ್ನು ತಿದ್ದಿಕೊಂಡು ಹೊಸ ಜೀವನ ಆರಂಭಿಸಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬಾಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಮನೋವೈದ್ಯರಾದ ಡಾ.ಅಮೀತಗ ಕುಮಾರ್, ಅರೆಕಾಲಿಕ ಸ್ವಯಂ ಸೇವಕರಾದ ರಾಘವೇಂದ್ರ, ಯಾದಗಿರಿ ಕಾರಾಗೃಹ ಅಧೀಕ್ಷಕರಾದ ಎಸ್ ಎಸ್ ಪಾಟೀಲ್ ಇದ್ದರು.

Leave a Reply

Your email address will not be published. Required fields are marked *

Suddi Belaku