by
Tag: Suddi Belaku

ಯಾದಗಿರಿ: ಬಸ್ನಲ್ಲೇ ಹೃದಯಾಘಾತದಿಂದ ಪ್ರಯಾಣಿಕ ಸಾವು
ಸುದ್ದಿ ಬೆಳಕು ವಾರ್ತೆ ಯಾದಗಿರಿ : ಯಾದಗಿರಿಯಿಂದ ಗುರುಮಠಕಲ್ ಕಡೆಗೆ ತೆರಳುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್ಟಿಸಿ) ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ರಾಮಚಂದ್ರ (62) ಎಂದು ಗುರುತಿಸಲಾಗಿದ್ದು, ಅವರು ಯಾದಗಿರಿ ತಾಲೂಕಿನ ಯದ್ಲಾಪುರ ತಾಂಡಾ ನಿವಾಸಿಯಾಗಿದ್ದಾರೆ. ಯಾದಗಿರಿ–ಗುರುಮಠಕಲ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ ಆಶನಾಳ ಸಮೀಪ ತಲುಪಿದ ವೇಳೆ ರಾಮಚಂದ್ರ ಅವರಿಗೆ ಏಕಾಏಕಿ ಹೃದಯಾಘಾತ ಉಂಟಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಅವರು ಬಸ್ನಲ್ಲಿಯೇ ಮೃತಪಟ್ಟಿದ್ದಾರೆ…
by

ಸೇಡಂ–ಯಾದಗಿರಿ ಬಸ್ ಅವ್ಯವಸ್ಥೆ: 8 ಬಸ್ ತಡೆದು ವಿದ್ಯಾರ್ಥಿಗಳ ರಸ್ತೆ ತಡೆ ಪ್ರತಿಭಟನೆ
ಸುದ್ದಿ ಬೆಳಕು ವಾರ್ತೆ ಯಾದಗಿರಿ: ಸೇಡಂ–ಯಾದಗಿರಿ ಮಾರ್ಗದಲ್ಲಿ ಸಂಚರಿಸುವ ಸರ್ಕಾರಿ ಬಸ್ಗಳು ಸಮಯಕ್ಕೆ ಸರಿಯಾಗಿ ಬಾರದಿರುವುದು, ವಿದ್ಯಾರ್ಥಿಗಳಿಗೆ ಸಮರ್ಪಕ ಆಸನ ವ್ಯವಸ್ಥೆ ಇಲ್ಲದಿರುವುದು ಹಾಗೂ ಸಾರಿಗೆ ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಡಹಳ್ಳಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ರಸ್ತೆ ತಡೆದು ತೀವ್ರ ಪ್ರತಿಭಟನೆ ನಡೆಸಿದರು. ಹತ್ತುಕುಣಿ, ಯಡಹಳ್ಳಿ, ಹೊರುಂಚ–ಹೊರುಂಚ ತಾಂಡಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಪ್ರತಿದಿನ ಇದೇ ಮಾರ್ಗದ ಬಸ್ಗಳನ್ನು ಅವಲಂಬಿಸಿ ಶಾಲೆ ಹಾಗೂ ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಆದರೆ ಬಸ್ಗಳು ನಿಗದಿತ ವೇಳೆಗೆ…
by

ಮಳೆಗಾಗಿ ಮೈಲಾರಲಿಂಗೇಶ್ವರನ ಮೊರೆ ಹೋದ ರಾಮಸಮುದ್ರ ಗ್ರಾಮಸ್ಥರು: ಭಜನೆ ಮಾಡುತ್ತಾ ಪಾದಯಾತ್ರೆ
ಮೈಲಾಪುರದ ದೇಗುಲದಲ್ಲಿ ವಿಶೇಷ ಪೂಜೆ | ಅನ್ನದಾತರ ಬದುಕು ಹಸನಾಗಲಿ ಎಂದು ವರುಣನಲ್ಲಿ ಪ್ರಾರ್ಥನೆ ಸುದ್ದಿ ಬೆಳಕು ವಾರ್ತೆ ಯಾದಗಿರಿ : ಮುಂಗಾರು ಮಳೆಗಾಗಿ ಕಾದು ಕುಳಿತಿರುವ ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮಸ್ಥರು ವರುಣನ ಕೃಪೆಗಾಗಿ ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಭಜನೆ ಮಾಡುತ್ತಾ ಪಾದಯಾತ್ರೆ ನಡೆಸಿದರು. ಮಳೆಗಾಗಿ ಪ್ರಾರ್ಥಿಸಿ ಗ್ರಾಮದಿಂದ ಕಾಲ್ನಡಿಗೆಯಲ್ಲಿ ಹೊರಟ ನೂರಾರು ಭಕ್ತರ ತಂಡವು, ದಾರಿಯುದ್ದಕ್ಕೂ ದೇವರ ನಾಮಸ್ಮರಣೆ ಹಾಗೂ ಭಜನೆಗಳನ್ನು ಮಾಡುತ್ತಾ ಮೈಲಾಪುರದ ದೇಗುಲವನ್ನು ತಲುಪಿತು. ದೇವಾಲಯದ ಆವರಣದಲ್ಲಿ ಮಳೆಗಾಗಿ ವಿಶೇಷ ಭಜನೆ…
by

ರೈತನ ಕೂಗಿಗೆ ವರುಣದೇವ ಕರುಣೆ ತೋರಲಿ
ಈ ವರ್ಷದ ಮುಂಗಾರು ಅವಧಿಯಲ್ಲಿ ಉತ್ತರ ಕರ್ನಾಟಕ ಸೇರಿದಂತೆ ಇಡೀ ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಮತ್ತೊಮ್ಮೆ ಭೀಕರ ಬರಗಾಲದ ಆತಂಕ ಎದುರಾಗಿದೆ. ** ಬರಲಿಲ್ಲ ಬರಲಿಲ್ಲ ಮಳೆರಾಯ ಬರಲಿಲ್ಲ ರೈತರಿಗೆ ಉಳಿಗಾಲವಿಲ್ಲ ಕಬ್ಬಾಳಿ ನೀನೊಲೆದು ಮುಂಗಾರು ಮಳೆ ಸುರಿಲು ಕಾಯದಿರೆ ಬದುಕೇ ಇಲ್ಲ ನನ್ನವ್ವ ಕಾಯದಿರೆ ಬದುಕಿ ಇಲ್ಲ.* ಎನ್ನುವ ಮಳೆರಾಯನ ಹಾಡು ಸತ್ಯವಾದಂತಿದೆ ರೈತರ ಬದುಕು ಬಾರೋ ಮಳೆರಾಯ ಬಾರೋ ಎನ್ನುವಂತಾಗಿದೆ ಗಂಗೆಯನ್ನು ಧರೆಗಿಳಿಸಲು ರೈತರು ಎಲ್ಲಾ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದರು ಯಾವುದಕ್ಕೂ ಮಳೆರಾಯ…
by

ಕೃಷಿ ಸಚಿವರಿಲ್ಲದೆ ರೈತ ಸಂಕಷ್ಟ: ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ರಾಚನಗೌಡ ಮುದ್ನಾಳ ಆಕ್ರೋಶ
ಸುದ್ದಿ ಬೆಳಕು ವಾರ್ತೆ ಯಾದಗಿರಿ: ಮುಂಗಾರು ಆರಂಭವಾಗಿ ರಾಜ್ಯದಾದ್ಯಂತ ರೈತರು ಬಿತ್ತನೆ ಕಾರ್ಯದಲ್ಲಿ ನಿರತರಾಗಿರುವ ಈ ನಿರ್ಣಾಯಕ ಸಂದರ್ಭದಲ್ಲಿ ಕೃಷಿ ಇಲಾಖೆಗೆ ಪೂರ್ಣಾವಧಿ ಸಚಿವರನ್ನು ನೇಮಿಸದೆ ರಾಜ್ಯ ಸರ್ಕಾರ ಅನ್ನದಾತನನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ ತೀವ್ರವಾಗಿ ಖಂಡಿಸಿದ್ದಾರೆ. ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ರೈತರು ಭೂಮಿ ಹದಗೊಳಿಸಿ ಬೀಜ ಬಿತ್ತಲು ಕಾಯುತ್ತಿದ್ದಾರೆ. ಆದರೆ ರೈತ ಸಂಪರ್ಕ ಕೇಂದ್ರಗಳಲ್ಲಿ ಡಿಎಪಿ, ಯೂರಿಯಾ ಸಿಗದೆ ರೈತರು ಬೆಳಗ್ಗಿನಿಂದ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.…
by

ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ರಾಚನಗೌಡ ಮುದ್ನಾಳ ಅಭಿನಂದನೆ
ಸುದ್ದಿ ಬೆಳಕು ವಾರ್ತೆ ಯಾದಗಿರಿ : ಭಾರತದ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಚುನಾಯಿತ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾದಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತದ ಚುನಾಯಿತ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಬುಧವಾರಕ್ಕೆ 4,399 ದಿನಗಳನ್ನು ಪೂರೈಸಿದ್ದು, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು…
by

ಯುಪಿಎಸ್ಸಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ: ಗ್ರಾಮೀಣ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ
ಸುದ್ದಿ ಬೆಳಕು ವಾರ್ತೆ ಸೈದಾಪುರ: ವಾಸವಿ ಅಕಾಡೆಮಿಯಿಂದ ಯುಪಿಎಸ್ಸಿ ಪರೀಕ್ಷೆ ಎದುರಿಸುವವರಿಗೆ ಉಚಿತ ತರಬೇತಿ ನೀಡಲಾಗುವುದು, ಇದನ್ನು ಯಾದಗಿರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ ಬಡ ಮತ್ತು ಪ್ರತಿಭಾವಂತ ವಿದ್ಯಾಥಿಗಳು ಈ ಅವಕಾಶವನ್ನು ಸದೂಪಯೋಗ ಪಡಿಸಿಕೊಳ್ಳಬೇಕು ಎಂದು ಕರ್ನಾಟಕ ಆರ್ಯ ವೈಶ್ಯ ಮಹಾಸಭೆಯ ನಿರ್ದೇಶಕರಾದ ರಾಘವೇಂದ್ರ ಬಾದಾಮಿ ಮತ್ತು ಶ್ರೀನಿವಾಸ ಓಬಳ್ಳಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕ ಆರ್ಯ ವೈಶ್ಯ ಮಹಾಸಭೆಯು ಸಮಾಜದ ಸರ್ವಾಂಗಿಣ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಿದೆ. ಅದರಂತೆ ವಾಸವಿ ಅಕಾಡೆಮಿಯ ಮೂಲಕ…
by

ಪರಿಸರಸ್ನೇಹಿ ತಂತ್ರಜ್ಞಾನದಿಂದ ಪರಿಸರ ರಕ್ಷಣೆ : ಸತ್ಯನಾರಾಯಣ
ಸುದ್ದಿ ಬೆಳಕು ವಾರ್ತೆ ಬಳ್ಳಾರಿ:ಇಂಜಿನಿಯರ್ಗಳು ಮತ್ತು ತಂತ್ರಜ್ಞರು ಸುಸ್ಥಿರ ಅಭಿವೃದ್ಧಿ, ನವೀಕರಿಸಬಹುದಾದ ಇಂಧನ ಬಳಕೆ ಮತ್ತು ಪರಿಸರಸ್ನೇಹಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮಾಲಿನ್ಯ ನಿಯಂತ್ರಣ ಮತ್ತು ಹಸಿರು ಭವಿಷ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತ ಚಿತ್ತ ಹರಿಸಬೇಕಿದೆ ಅಂಥಾ ಇಂಜಿನಿಯರ್ಸ ಹಾಗೂ ಆರ್ಕಿಟೆಕ್ಟ್ ಅಸೋಸಿಯೇಷನ್ ಅಧ್ಯಕ್ಷ ಎ ಎಸ್ ಸತ್ಯನಾರಾಯಣ ಅವರು ಕರೆ ನೀಡಿದರು. ಇಂದು ಬಳ್ಳಾರಿಯ ಮೋಕಾ ರಸ್ತೆಯ ಸಂಗನಕಲ್ಲು ಬಳಿಯ ಪ್ರಕೃತಿ ಲೇಔಟ್ ನಲ್ಲಿನ ಎಸಿಸಿಇಎ ನಿವೇಶನದ ವಿಶ್ವ ಪರಿಸರ ದಿನವನ್ನು ಸಸಿ…
by
- ಪತ್ರಕರ್ತರ ಹಿತಾಸಕ್ತಿಗೆ ಸಹಕಾರ: ಶಾಸಕ ಶರಣಗೌಡ ಕಂದಕೂರ ಭರವಸೆ

- ಪರವಾನಿಗೆ ಇಲ್ಲದೆ ವ್ಯಾಪಾರ ಮಾಡಿದರೆ ಕ್ರಮ: ಯಾದಗಿರಿಯಲ್ಲಿ ಡಿಸಿ ಎಚ್ಚರಿಕೆ

- ಜಿಲ್ಲೆಗೆ ಸಚಿವ ಸ್ಥಾನ ವಂಚನೆ; ತುನ್ನೂರರಿಗೆ ಕೆಕೆಆರ್ಡಿಬಿ ಅಧ್ಯಕ್ಷ ಸ್ಥಾನ ನೀಡಿ : ಭೀಮು ಪೂಜಾರಿ

- ಯಾದಗಿರಿಗೆ ರಾಜೀವಗಾಂಧಿ ಜ್ಯೋತಿ ಸದ್ಭಾವನಾ ಯಾತ್ರೆ; ರಾಷ್ಟ್ರೀಯ ಏಕತೆ ಸಂದೇಶ

- ಎನ್ಸಿಡಿಸಿ (ತಿದ್ದುಪಡಿ) ಮಸೂದೆ-2026 ಸಂಸತ್ತಿನಲ್ಲಿ ಅಂಗೀಕಾರ
















