Tag: Suddi Belaku

  • ಡಿಕೆಶಿ ಯುಗಾರಂಭ: ರಾಜ್ಯದ ನೂತನ ಸಿಎಂ ಆಗಿ ಅಧಿಕಾರ ಸ್ವೀಕಾರ
    ,

    ಡಿಕೆಶಿ ಯುಗಾರಂಭ: ರಾಜ್ಯದ ನೂತನ ಸಿಎಂ ಆಗಿ ಅಧಿಕಾರ ಸ್ವೀಕಾರ

    ಸುದ್ದಿ ಬೆಳಕು ವಾರ್ತೆ  ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಇಂದು ಐತಿಹಾಸಿಕ ಜಿಜ್ಞಾಸೆಗಳಿಗೆ ತೆರೆ ಬಿದ್ದಿದ್ದು, ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ, ‘ಟ್ರಬಲ್ ಶೂಟರ್’ ಖ್ಯಾತಿಯ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ನ ಅಧಿಕಾರ ಹಂಚಿಕೆ ಸೂತ್ರದನ್ವಯ ಸಿದ್ದರಾಮಯ್ಯ ಅವರ ಅವಧಿ ಮುಕ್ತಾಯಗೊಂಡ ಬೆನ್ನಲ್ಲೇ, ಇಂದು (ಜೂನ್ 3, 2026) ರಾಜಭವನದ ಲೋಕಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲರು ಡಿಕೆಶಿ ಅವರಿಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.ಹಿರಿಯ ನಾಯಕರ ಆಶೀರ್ವಾದ ಪಡೆದ…

  • ಮಕ್ಕಳೇ ದೇಶದ ಭವಿಷ್ಯ: ಶಾಲಾ ಪ್ರಾರಂಭೋತ್ಸವದಲ್ಲಿ ಟಿ.ಪಿ. ಉಮೇಶ್ ಕರೆ

    ಮಕ್ಕಳೇ ದೇಶದ ಭವಿಷ್ಯ: ಶಾಲಾ ಪ್ರಾರಂಭೋತ್ಸವದಲ್ಲಿ ಟಿ.ಪಿ. ಉಮೇಶ್ ಕರೆ

    ಸುದ್ದಿ ಬೆಳಕು ವಾರ್ತೆ ಹೊಳಲ್ಕೆರೆ : ಮಕ್ಕಳೆ ನಮಗೆ ದೇಶ ಮಕ್ಕಳೆ ನಮಗೆ ವಿಶ್ವ ಮಕ್ಕಳೆ ನಮಗೆ ಭವಿಷ್ಯ. ಮಕ್ಕಳನ್ನು ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿಸುವ ಜೊತೆಗೆ ಕೌಶಲ್ಯವಂತ ಸಂಸ್ಕಾರವಂತ ಸಂಸ್ಕೃತಿಶೀಲರನ್ನಾಗಿಸಬೇಕಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಟಿ.ಪಿ.ಉಮೇಶ್ ಹೇಳಿದರು.  ತಾಲ್ಲೂಕಿನ ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಹಾಗು ಪೋಷಕರ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು 2026-27 ನೇ ಸಾಲಿನ ಶೈಕ್ಷಣಿಕ ವರ್ಷ ಉತ್ತಮ ಶಿಕ್ಷಣ ಉಜ್ವಲ ಭವಿಷ್ಯ ಎಂಬ ಧ್ಯೇಯದೊಂದಿಗೆ ಆರಂಭಗೊಳ್ಳುತ್ತಿದೆ.…

  • ರಾಸಾಯನಿಕ ಗೊಬ್ಬರಗಳ ಅತಿಬಳಕೆ ಆರೋಗ್ಯಕ್ಕೆ ಮಾರಕ: ಡಾ. ಎ.ಜಿ. ಶ್ರೀನಿವಾಸ್

    ರಾಸಾಯನಿಕ ಗೊಬ್ಬರಗಳ ಅತಿಬಳಕೆ ಆರೋಗ್ಯಕ್ಕೆ ಮಾರಕ: ಡಾ. ಎ.ಜಿ. ಶ್ರೀನಿವಾಸ್

    ಸುದ್ದಿ ಬೆಳಕು ವಾರ್ತೆ  ಗುರುಮಠಕಲ್: ಪ್ರಕೃತಿದತ್ತ ಅತ್ಯಂತ ಉತ್ತಮ ಫಲವತ್ತತೆಯ ಭೂಮಿಯನ್ನು ಹೊಂದಿದ ಗುರುಮಠಕಲ್ ಕ್ಷೇತ್ರದ ಜಮೀನು ಮತ್ತು ಹೊಲಗಳಿಗೆ ವಿಷಪೂರಿತ ರಾಸಾಯನಿಕ ಮತ್ತು ಕೀಟನಾಶಕಗಳನ್ನು ಸೇರಿಸದಂತೆ ಜನರಲ್ಲಿ ಜಾಗೃತಿ ಮೂಡಿಸುವಂತೆ, ರಾಯಚೂರ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರದ ಪ್ರಧ್ಯಾಪಕರು, ಸಂಪನ್ಮೂಲ ವ್ಯಕ್ತಿ ,ಡೀಮ್ ಡಾ.ಎ.ಜಿ.ಶ್ರೀನಿವಾಸ್ ಅವರು  ಕರೆ ನೀಡಿದರು. ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ವಿಶ್ವವಿದ್ಯಾಲಯ ರಾಯಚೂರ ಮತ್ತು ಕೃಷಿ ಇಲಾಖೆ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಕೃಷಿಯಲ್ಲಿ ರಾಸಾಯನಿಕಗಳ ಸಮರ್ಪಕ ಬಳಕೆ  ಬಗ್ಗೆ ತಾಲೂಕಿನ ರಸಗೊಬ್ಬರ…

  • ಯರಗೋಳ, ಹೋರುಂಚಾದಲ್ಲಿ ₹7 ಕೋಟಿ ರಸ್ತೆ ಕಾಮಗಾರಿಗೆ ಶಾಸಕ ಕಂದಕೂರ ಚಾಲನೆ

    ಯರಗೋಳ, ಹೋರುಂಚಾದಲ್ಲಿ ₹7 ಕೋಟಿ ರಸ್ತೆ ಕಾಮಗಾರಿಗೆ ಶಾಸಕ ಕಂದಕೂರ ಚಾಲನೆ

    ಡೆವಲಪ್ಮೆಂಟ್ ಪಾಲಿಟಿಕ್ಸ್ ಮಾಡಿ, ಸೆಟಲ್‌ಮೆಂಟ್ ರಾಜಕಾರಣ ಬೇಡ: ಡಿಕೆಶಿಗೆ ಶಾಸಕ ಕಂದಕೂರ ಸಲಹ ಸುದ್ದಿ ಬೆಳಕು ವಾರ್ತೆ  ಯಾದಗಿರಿ : ರಾಜ್ಯದಲ್ಲಿ ಅಧಿಕಾರ ನಡೆಸಿದ ಮೂರು ಜನ ಮುಖ್ಯಮಂತ್ರಿಗಳು ತಮ್ಮ ಜನಪರ ಆಡಳಿತದಿಂದ ಜನ ಮಾನಸದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ ಎಂದು ಗುರಮಠಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರು ತಿಳಿಸಿದರು. ಸೋಮವಾರ ಮತಕ್ಷೇತ್ರದ ಹೋರುಂಚಾ ಹಾಗೂ ಯರಗೋಳ ಗ್ರಾಮದಲ್ಲಿ ಕೆಕೆಆರ್ ಡಿಬಿಯ ಮೈಕ್ರೋ ಎಸ್.ಸಿಪಿ ಯೋಜನೆಯಡಿ ಥಾವರು ನಾಯಕ ತಾಂಡಾದಿಂದ ತಾನು ನಾಯಕ ತಾಂಡಾವರೆಗೆ ಮುಖ್ಯರಸ್ತೆ 4 ಕೋಟಿ…

  • ವಸತಿ ನಿಲಯಗಳಲ್ಲಿ ಬಯೊಮೆಟ್ರಿಕ್ ದುರ್ಬಳಕೆ : ಕರವೇ ಗಂಭೀರ ಆರೋಪ

    ವಸತಿ ನಿಲಯಗಳಲ್ಲಿ ಬಯೊಮೆಟ್ರಿಕ್ ದುರ್ಬಳಕೆ : ಕರವೇ ಗಂಭೀರ ಆರೋಪ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಗುರುಮಠಕಲ್ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ. ಜಾ. ಮತ್ತು ಪ. ಪಂ. ವಸತಿ ನಿಲಯಗಳಲ್ಲಿ ಬಯೊಮೆಟ್ರಿಕ್ ಹಾಜರಾತಿ ಇದ್ದರೂ ಅದರ ಸದ್ಬಳಕೆ ಆಗದೇ ವಾರ್ಡನ್ ಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಇದರಲ್ಲಿ ತಾಲ್ಲೂಕು ಅಧಿಕಾರಿಗಳು ಸಿಬ್ಬಂದಿ ವರ್ಗದವರು ಶಾಮೀಲಾಗಿದ್ದು, ಇವರ ವಿರುದ್ಧ ಕ್ರಮ ಕೈಗೊಂಡು ತಪ್ಪಿತಸ್ಥ ಅಧಿಕರಿಗಳ ಅಮಾನತು ಮಾಡುವಂತೆ ಕರವೇ ಜಿಲ್ಲಾ ಪ್ರಧಾನಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ಆಗ್ರಹಿಸಿದರು. ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ…

  • ಗುಜರಾತ್ ಧೂಳೀಪಟ; ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಆರ್.ಸಿ.ಬಿ!
    ,

    ಗುಜರಾತ್ ಧೂಳೀಪಟ; ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಆರ್.ಸಿ.ಬಿ!

    ಸುದ್ದಿ ಬೆಳಕು ವಾರ್ತೆ  ಅಹಮದಾಬಾದ್‌ : ಕ್ರಿಕೆಟ್ ಪ್ರೇಮಿಗಳ ದಶಕಗಳ ಕನಸು ಈಗ ಸತತ ಎರಡನೇ ಬಾರಿಗೆ ನನಸಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026ರ ಐಪಿಎಲ್ ಮಹಾಸಮರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿಹಿಡಿದು ಇತಿಹಾಸ ಸೃಷ್ಟಿಸಿದೆ. ಕರಾರುವಾಕ್ ಬೌಲಿಂಗ್ ದಾಳಿಗೆ ನಡುಗಿದ ಗುಜರಾತ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ…

  • ಅನುಭವಿ ನಾಯಕ ರುದ್ರಪ್ಪ ಲಮಾಣಿ ಅವರಿಗೆ ಡಿಸಿಎಂ ಪಟ್ಟ ನೀಡಬೇಕು: ಆಕಾಶ ಪವಾರ

    ಅನುಭವಿ ನಾಯಕ ರುದ್ರಪ್ಪ ಲಮಾಣಿ ಅವರಿಗೆ ಡಿಸಿಎಂ ಪಟ್ಟ ನೀಡಬೇಕು: ಆಕಾಶ ಪವಾರ

    ಸುದ್ದಿ ಬೆಳಕು ವಾರ್ತೆ ​ಯಾದಗಿರಿ : ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಹಾಲಿ ಶಾಸಕ ಹಾಗೂ ಮಾಜಿ ಉಪ ಸಭಾಧ್ಯಕ್ಷರಾಗಿ ರುದ್ರಪ್ಪ ಲಮಾಣಿ ಅವರಿಗೆ ರಾಜ್ಯ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ (DCM) ಸ್ಥಾನ ನೀಡಬೇಕು ಅಖಿಲ ಭಾರತ ಬಂಜಾರಾ ಸೇವಾ ಸಂಘ ಹಾಗೂ ಜಿಲ್ಲಾ ಅಧ್ಯಕ್ಷರು ಹಾಗೂ ಕಾಂಗ್ರೆಸ ಯುವ ಮುಖಂಡರಾದ ಆಕಾಶ ಪವಾರ ಒತ್ತಾಯಿಸಿದೆ. ​ಸಮಾಜದ ಹಿರಿಯ ನಾಯಕ ಮತ್ತು ಅನುಭವಿ ರಾಜಕಾರಣಿ ಆದ ​ರುದ್ರಪ್ಪ ಲಮಾಣಿ ಅವರು ಲಮಾಣಿ ಸಮಾಜದ ಅತ್ಯಂತ ಹಿರಿಯ ಮತ್ತು…

  • ಜೂನ್ 3ರಂದು ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ
    , ,

    ಜೂನ್ 3ರಂದು ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ

    ಸುದ್ದಿ ಬೆಳಕು ವಾರ್ತೆ ಬೆಂಗಳೂರು : “ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಡಿ.ಕೆ. ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತೇನೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಪ್ರಕಟಿಸಿದರು. ವಿಧಾನಸೌಧದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. “ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ…

  • ಗ್ರಾಮೀಣ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು: ಶಾಸಕ ಕಂದಕೂರ

    ಗ್ರಾಮೀಣ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು: ಶಾಸಕ ಕಂದಕೂರ

    ಸುದ್ದಿ ಬೆಳಕು ವಾರ್ತೆ ಯಾದಗಿರಿ: ಸರ್ಕಾರದಿಂದ ಬಿಡುಗಡೆಗೊಳಿಸುವ ಅನುದಾನವನ್ನ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಅಧಿಕಾರಿಗಳು ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವಂತೆ ಶಾಸಕ ಶರಣಗೌಡ ಕಂದಕೂರ ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಬುಧವಾರ ಗುರಮಠಕಲ್ ಕ್ಷೇತ್ರದ ಚಿನ್ನಾಕಾರ್ ಕ್ರಾಸ್ ಬಳಿ ಕೆಕೆಆರ್ಡಿಬಿ ಮೈಕ್ರೋ ಸಾಮಾನ್ಯ ಯೋಜನೆ ಅಡಿಯಲ್ಲಿ 9.90 ಕೋಟಿ ರೂ.ವೆಚ್ಛದಲ್ಲಿ ಮತಕ್ಷೇತ್ರದ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ 16 ಮುಖ್ಯ ರಸ್ತೆ ಆಯ್ದು ಭಾಗಗಳಲ್ಲಿ ಮರು ಡಾಂಬರಕರಣ ಹಾಗೂ ಗುರುಮಠಕಲ್ ಪಟ್ಟಣದ ರಸ್ತೆ…

  • ಯಾದಗಿರಿಯಲ್ಲಿ ಭಾರಿ ಮಳೆ ಅಬ್ಬರ – ಜಲಾವೃತ ರಸ್ತೆಗಳು, ಸಾರ್ವಜನಿಕರ ಆಕ್ರೋಶ

    ಯಾದಗಿರಿಯಲ್ಲಿ ಭಾರಿ ಮಳೆ ಅಬ್ಬರ – ಜಲಾವೃತ ರಸ್ತೆಗಳು, ಸಾರ್ವಜನಿಕರ ಆಕ್ರೋಶ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಜಿಲ್ಲೆಯಲ್ಲಿ ನಸುಕಿನ ಜಾವದಿಂದಲೇ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಯಾದಗಿರಿ ನಗರ ಸೇರಿದಂತೆ ಹಲವೆಡೆ ವರುಣನ ಆರ್ಭಟ ಮುಂದುವರಿದಿದೆ. ನಗರದ ಪ್ರಮುಖ ರಸ್ತೆಗಳು ಮಳೆ ನೀರಿನಿಂದ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ನಗರದ ಕೇಂದ್ರ ಬಸ್ ನಿಲ್ದಾಣ ಸಮೀಪದ ರಸ್ತೆ ಸಂಪೂರ್ಣ ನೀರಿನಿಂದ ಆವೃತವಾಗಿದ್ದು, ಬೈಕ್ ಹಾಗೂ ಇತರೆ ವಾಹನಗಳು ಜಲ ದಿಗ್ಬಂಧನಕ್ಕೆ ಸಿಲುಕಿದ ದೃಶ್ಯಗಳು ಕಂಡುಬಂದವು. ರಸ್ತೆ ಮಧ್ಯೆ ನಿಂತ ವಾಹನಗಳ ಸುತ್ತ ಮಳೆ…

Suddi Belaku