
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಕಡೇಚೂರು ಕೈಗಾರಿಕಾ ಪ್ರದೇಶದ ವಿಷಾನಿಲ ದುರಂತದಿAದ ಮೂವರು ಮೃತಪಟ್ಟು ಓರ್ವ ಗಂಭೀರ ಘಟನೆ ನಡೆದು ಒಂದು ಬೆಳಗ್ಗೆ ಮತ್ತೊಂದು ಕೈಗಾರಿಕೆಯಲ್ಲಿ ಇಂಥದ್ದೇ ದುರಂತ ನಡೆದು ಓರ್ವ ಕಾರ್ಮಿಕ ಗಂಭೀರ ಸ್ಥಿತಿಗೆ ತಲುಪಿ ಆಸ್ಪತ್ರೇ ಸೇರಿದ್ದು ಪ್ರಕರಣ ದಾಖಲಾಗಿದ್ದರೂ ಸರ್ಕಾರ ಇಂತಹ ಕಂಪೆನಿಗಳ ಮುಚ್ಚಲು ಕ್ರಮ ಕೈಗೊಳ್ಳುತ್ತಿಲ್ಲವೇಕೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾದ್ಯಕ್ಷ ಟಿ.ಎನ್. ಭೀಮುನಾಯಕ ಪ್ರಶ್ನಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ರಾಮೀಸ್ ಕಂಪನಿ ಹೆಸರಿನ ಕೈಗಾರಿಕೆ ಕಂಪನಿಯಲ್ಲಿ ಆಯಾನ್ ಶಂಶೋದ್ದಿನ್ ಹುಮ್ನಾಬಾದ್ ಎಂಬ ಕಾರ್ಮಿಕ ತೀವ್ರ ಅಸ್ವಸ್ಥಗೊಂಡಿದ್ದರಿAದ ರಾತ್ರಿಯೇ ಹೆಚ್ಚಿನ ಚಿಕಿತ್ಸೆಗೆಂದು ರಾಯಚೂರು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿರುವ ಅವರು, ಈಗಾಗಲೇ ಮಾಲಿನ್ಯ ನಿಯಂತ್ರಣ ಮಂಡಳಿಯಿAದ ಇಲ್ಲಿನ ಎಲ್ಲ ವಿಷಯಕಾರಿ ರಾಸಾಯನಿಕ ಹೊರಸೂಸುವ ಕಂಪೆನಿಗಳಿಗೆ ಕಳೆದ ಜೂನ್ ತಿಂಗಳಲ್ಲಿಯೇ ಬಂದ್ ಮಾಡಲು ನೋಟೀಸ್ ಜಾರಿ ಮಾಡಿದ್ದಾರೆ ಎಂದು ಮಾಹಿತಿ ಇದೆ.
ಇದಲ್ಲದೇ ಅದೇ ತಿಂಗಳಲ್ಲಿ ಎಲ್ಲ ಕಂಪನಿಗಳಿಗೆ ನೋಟೀಸ್ ಸಿದ್ದಪಡಿಸಿದ್ದರೂ ಕೇವಲ ಒಂದೇ ಕಂಪೆನಿಗೆ ಜಾರಿ ಮಾಡಿ ಇನ್ನುಳಿದ ಕಂಪೆನಿಗಳಿಗೆ ನೋಟೀಸ್ ಕಳಿಸಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದ್ದು ಇದರ ಹಿಂದೆ ಯಾವ ಹಿತಾಸಕ್ತಿ ಅಡಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಎಲ್ಲ ಅಪಾಯಕಾರಿ ಕಂಪೆನಿಗಳಿಗೆ ನೋಟೀಸ್ ಕೊಟ್ಟು ಬಂದ್ ಮಾಡಿದ್ದಿದ್ದರೆ ಕಾರ್ಮಿಕರು ಸಾಯುತ್ತಿದ್ದಿಲ್ಲ ಇದುವರೆಗೆ ಹಲವು ಕಾರ್ಮಿಕರು ಸಾವನ್ನಪ್ಪಿದ್ದಾರೆ ಇದಕ್ಕೆ ಕಂಪೆನಿಗಳು ಕೇವಲ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ. ಆದರೆ ಕಾರ್ಮಿಕರ ಪ್ರಾಣ ಹರಣ ಮಾಡಿದ ಕಂಪೆನಿ ಮಾಲೀಕರ ವಿರುದ್ಧ ಎಫ್.ಎಸ್.ಎಲ್ ವರದಿ ಬಂದ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದ್ದಾರೆ.
ಆದರೆ ಕಾರ್ಮಿಕರ ಸಾವು ಮಾಲೀಕರ ಲಾಭಕೋರತನ ಹಾಗೂ ನಿರ್ಲಕ್ಷö್ಯ ಕಾರಣದಿಂದ ಸಾವಾಗಿರುವುದರಿಂದ ಇದನ್ನು ಕೊಲೆ ಎಂದೇ ಪರಗಣಿಸಿ ಎಫ್.ಐ.ಆರ್. ದಾಖಲಿಸಿ ಮಾಲೀಕರನ್ನು ಎ-1 ಆರೋಪಿಯಾಗಿಸಿ ಬಂಧಿಸಬೇಕು ಮತ್ತು ಕಂಪೆನಿಗಳನ್ನು ಶಾಶ್ವತವಾಗಿ ಬಂದ್ ಮಾಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈಗಾಗಲೇ ಸ್ಥಳೀಯ ಶಾಸಕರು ವಿಧಾನಸಭೆಯಲ್ಲಿ ನಿರಂತರ ಧ್ವನಿ ಎತ್ತಿ ಬಂದ್ ಮಾಡಲು ಒತ್ತಾಯಿಸಿದ್ದರೂ ರೈತರು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದರೂ ಪತ್ರಿಕೆಗಳಲ್ಲಿ ವರದಿಯಾಗಿದೆ
ಆದರೆ ಸರ್ಕಾರ ಈ ಕಂಪೆನಿಗಳನ್ನು ಮುಚ್ಚಿಸಲು ಮೀನಾ ಮೇಷ ಎಣಿಸುತ್ತಿರುವುದೇಕೆ? ಯಾವು ಹಿತಾಸಕ್ತಿ ಕಾರಣಕ್ಕೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಒಂದೆಡೆ ಈ ಭಾಗದ ರೈತರು ಗುಳೆ ಹೋಗುತ್ತಿದ್ದಾರೆ ಮನೆಯಲ್ಲಿ ಹಿರಿಯ ಜೀವಗಳನ್ನು ಬಿಟ್ಟು ಹೋಗುತ್ತಿದ್ದು, ಅವರು ವಿಷಾನಿಲದಿಂದ ಸಾಯುವಂತಾಗಿದೆ. ಅತ್ತ ಕಾರ್ಮಿಕರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಲ್ಲ ರೀತಿಯಿಂದಲೂ ಇಲ್ಲಿನ ಕಾರ್ಖಾನೆಗಳು ಲಾಭಕ್ಕಾಗಿ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕು ಮಾಲೀಕರನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದು, ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ಸಂತೋಷ ನಿರ್ಮಲಕರ್, ನಿಂಗಪ್ಪ ಗುಡಗುಡಿ, ಭೀಮಾಶಂಕರ ಹತ್ತಿಕುಣಿ, ಪ್ರಕಾಶ ಪಾಟೀಲ್ ಜೈಗ್ರಾಮ್, ಶರಣಬಸಪ್ಪ ಯಲ್ಹೇರಿ, ಮೌನೇಶ ಮಾಧವಾರ, ಸುರೇಶ ಬೆಳಗುಂದಿ, ಮಹೇಶ ಸೈದಾಪೂರ, ದಿಲಿಪ್ ಕುಮಾರ ಸೈದಾಪೂರ, ಮಲ್ಲು ಬಾಡಿಯಾಲ, ಬಸ್ಸು ನಾಯಕ ಸೈದಾಪೂರ, ವೆಂಕಟರಾಮುಲು, ಸಾಬು ನೀಲಳ್ಳಿ, ನಾಗರಡ್ಡಿ ಕೂಡ್ಲೂರು ಎಚ್ಚರಿಸಿದ್ದಾರೆ.
ವಿಷಕಾರಿ ಕೈಗಾರಿಕೆಗಳನ್ನು ಮುಚ್ಚಿಸಲು ಈ ಭಾಗದ ಬೂಮಿ ಕಳೆದುಕೊಂಡ ರೈತರು, ಕೂಲಿ ಕಾರ್ಮಿಕರು ಪ್ರಜ್ಞಾವಂತರೂ ಸಹ ಕೈಜೋಡಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.











Leave a Reply