ಜಿಲ್ಲಾ ಹಿರಿಯ ತೆರಿಗೆ ಸಲಹೆಗಾರ ಪ್ರವೀಣ್ ಕುಮಾರ್ ವಿಭೂತಿಗೆ ಸನ್ಮಾನ.

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಪ್ರತಿ ವರ್ಷದಂತೆ ಈ ವರ್ಷವೂ ನಡೆದ ತೆರಿಗೆ ಸಲಹೆಗಾರರ ಸಮ್ಮೇಳನದಲ್ಲಿ ಯಾದಗಿರಿ ಹಿರಿಯ ಸಲಹೆಗಾರರನ್ನು ಗುರುತಿಸಿ ಸನ್ಮಾನಗೈದ ವೇದಿಕೆಯ ಕುರಿತು ಮಾತನಾಡಿದ ಜಿಲ್ಲಾಧ್ಯಕ್ಷ ನಾಗಪ್ಪ ಮೊಗದಂಪೂರ್ ಇತ್ತೀಚಿಗೆ ಕೋಲಾರ ಜಿಲ್ಲೆ ಅಜ್ಜಪ್ಪನಹಳ್ಳಿಯಲ್ಲಿ 2026-27 ಸಾಲಿನ ರಾಷ್ಟ್ರೀಯ ತೆರಿಗೆ ಸಮ್ಮೇಳನದಲ್ಲಿ ಸತತವಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಯಾದಗಿರಿ ಜಿಲ್ಲೆಯ ಹಿರಿಯರು ಹಾಗೂ ಖಜಾಂಚಿ ಆಗಿರುವ ಪ್ರವೀಣ್ ಕುಮಾರ್ ಅವರಿಗೆ ಈ ವರ್ಷದ ಹಿರಿಯ ನಾಗರಿಕರ ಸನ್ಮಾನ ಸಿಕ್ಕಿದ್ದು ಸಂತಸವಾಗಿದೆ  ಹಲವು ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿ, ತೆರಿಗೆಗಾರರಿಗೆ ತಮ್ಮದೇ ಮಾರ್ಗದರ್ಶನ ನೀಡಿದ ಪ್ರವೀಣ್ ಕುಮಾರ್ ವಿಭೂತಿ ಅವರಿಗೆ ವೇದಿಕೆ ಗುರುತಿಸಿ ಸನ್ಮಾನ ನೀಡಿದ್ದು ಜಿಲ್ಲೆಗೆ ಸಂತಸದ ವಿಷವಾಗಿದೆ ಎಂದರು.

ಈ ವೇಳೆಯಲ್ಲಿ ಅರುಣ್ ಕುಮಾರ್ ಬೊಪ್ಲೆ,ಕಾರ್ಯದರ್ಶಿ ಆನಂದ ಕುಮಾರ್ ಜೈನ್ ಸೇರಿದಂತೆ ಇನ್ನಿತರ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Suddi Belaku